1. PÀ£ÀßqÀzÀ
ªÉÆzÀ® ¢£À¥ÀwæPÉ - ¸ÀÆAiÉÆÃðzÀAiÀÄ
¥ÀæPÁ±À£À
2. PÀ£ÀßqÀzÀ
ªÉÆzÀ® ªÀÄPÀ̼À ¥ÀwæPÉ -
ªÀÄPÀ̼À ¥ÀĸÀÛPÀ
3. PÀ£ÀßqÀzÀ
ªÉÆzÀ® PÁAzÀ§jUÁwð - wgÀĪÀįÁA§
4. PÀ£ÀßqÀzÀ
ªÉÆzÀ® ¥ÀvÀæPÀvÉð - Dgï.
PÀ¯ÁåtªÀÄä
5. PÀ£ÀßqÀzÀ
ªÉÆzÀ® ¨ÉgÀ¼ÀZÀÄÑ AiÀÄAvÀæªÀ£ÀÄß ¹zÀÞ¥Àr¹zÀ PÀ£ÀßrUÀ -C£ÀAvÀ¸ÀħâgÁªï
6. PÀ£ÀßqÀzÀ
ªÉÆzÀ® ªÀÄĹèA PÀ« - ²±ÀÄ£Á¼À
µÀjÃ¥ÀgÀÄ
7. ªÉÆzÀ® «±Àé
PÀ£ÀßqÀ ¸ÀªÉÄäüÀ£À £ÀqÉzÀ ¸ÀܼÀ/£ÀUÀgÀ -
ªÉÄʸÀÆgÀÄ
8. ‘¢UÁqï D¥sï
¸Áä¯ï yAUï’ JA§ PÁzÀA§jAiÀÄ PÀvÀÈð -
CgÀÄAzsÀw gÁAiÀiï
9. Qæ.±À.1781gÀ
ºÉÆwÛUÉ «°AiÀÄA ºÀgïZɯï AiÀÄÄgÉãÀ¸ï UÀæºÀªÀ£ÀÄß
¸ÀA±ÉÆâü¹zÀgÀÄ.
10. «±ÀézÀ ªÉÆzÀ®
£ÉÆ¨É¯ï ¥Àæ±À¹ÛUÉ(¸Á»vÀå) ¨sÁd£ÀgÁzÀªÀgÀÄ ¥sÁæ£ïì£À ¸ÀÄ°è¥ÀÄæqÁªÉÄ (1901)
11. PÀ£ïºÁ gÁ¶ÖçÃ
GzÁåAiÀÄ£ÀªÀÅ ªÀÄzsÀå¥ÀæzÉñÀzÀ ªÀiÁqÀè& ¨Á¯ÁÎmï f¯ÉèUÀ½ªÉ.
12. ¨sÁgÀvÀzÀ
¥ÀæxÀªÀÄ ¨ÁåAPï 1786gÀ°è ¸ÁÜ¥À£ÉAiÀiÁzÀ ‘¨ÁåAPï D¥sï »AzÀƸÁÛ£ï’
13. ªÀiÁ£ÀªÀ£À
zÉúÀzÀ°ègÀĪÀ ¨É£Éß®ÄUÀ¼À ¸ÀASÉå 26.
14. ªÀ£À¸ÀàwAiÀÄ
vÀAiÀiÁjPÉAiÀÄ°è §¼À¸ÀĪÀ C¤® d®d£ÀPÀ.
15. ºÀÈzÀAiÀÄzÀ
MAzÀÄ §rvÀPÉÌ ¨ÉÃPÁUÀĪÀ CAzÁdÄ ¸ÀªÀÄAiÀÄ 0.8 ¸ÉPÉAqÀÄUÀ¼ÀÄ
16. DAUÀè
¨sÁµÉAiÀÄ°è ¸ÀégÁPÀëgÀªÀ£ÀÄß §¼À¸ÀzÉà ºÀÄnÖPÉÆAqÀ KPÉÊPÀ (AEIOU) ¥ÀzÀ ‘Rhythm’
ಭಾರತದ ರಕ್ಷಿತ ಕಾಡುಪ್ರದೇಶಗಳಲ್ಲಿ, 75 ಭಾರತೀಯ
ರಾಷ್ಟ್ರೀಯ ಉದ್ಯಾನವನಗಳು ಮತ್ತು 421
ಅಭಯಾರಣ್ಯಗಳಿವೆ. ಇವುಗಳಲ್ಲಿ 19 ಪ್ರಾಜೆಕ್ಟ್ ಟೈಗರ್ ಯೋಜನೆಯ ವ್ಯಾಪ್ತಿಯಲ್ಲಿವೆ. ದೇಶದ ಹವಾಮಾನ ಮತ್ತು ಭೌಗೋಳಿಕ ವೈವಿಧ್ಯದ ಫಲವಾಗಿ,
ಸುಮಾರು 350 ಸಸ್ತನಿಗಳು ಹಾಗೂ 1200 ಹಕ್ಕಿಗಳ ಪ್ರಭೇದಗಳಿಗೆ ಸೂರಾಗಿದೆ. ಉಪಖಂಡದಲ್ಲೇ ಇವು
ಅಪರೂಪದ್ದಾಗಿವೆ. ಪ್ರಸಿದ್ಧ ರಾಷ್ಟ್ರೀಯ ಅಭಯಾರಣ್ಯಗಳಲ್ಲಿ ಭರತ್ಪುರ, ಕಾರ್ಬೆಟ್, ಕನ್ಹಾ, ಕಾಜಿರಂಗಾ, ಪೆರಿಯಾರ್, ರಣಥಂಬೊರ್ ಮತ್ತು ಸಾರಿಸ್ಕಾ ಸೇರಿವೆ. ವಿಶ್ವದ ಅತಿ ದೊಡ್ಡ ಮ್ಯಾನ್ಗ್ರೂವ್ ಕಾಡು ಸುಂದರಬನ್ಸ್ ಪಶ್ಚಿಮ ಬಂಗಾಳದ ದಕ್ಷಿಣ ಭಾಗದಲ್ಲಿದೆ. ಸುಂದರ್ಬನ್ಸ್ UNESCO
ವಿಶ್ವ ಪರಂಪರೆಯ ತಾಣವಾಗಿದೆ.
ಪರಿಸರ ಸಂರಕ್ಷಣೆಗೆ ಸಮುದಾಯದ ಪ್ರಯತ್ನಗಳು - ಪವಿತ್ರ ವನಗಳು : ಭಾರತದಲ್ಲಿ ಪ್ರಕೃತಿಯ ಎಲ್ಲ ಸಂಪನ್ಮೂಲಗಳನ್ನು
ಗೌರವದಿಂದ ನೋಡುವ, ಸಂರಕ್ಷಿಸುವ ಮತ್ತು ಎಚ್ಚರಿಕೆಯಿಂದ ಬಳಸುವ ಸಂಪ್ರದಾಯ ಬಹಳ ಹಿಂದಿನಿಂದ
ಬಂದಿದೆ. ಅರಣ್ಯಗಳು ಗುಡ್ಡಗಾಡು ಜನರ ಜೀವನಾಡಿ. ಅವರು ಅರಣ್ಯವನ್ನು ತಾಯಿ ಎಂದೇ ಪರಿಗಣಿಸಿ
ಸಮನ್ವಯ ಜೀವನ ವಿಧಾನವನ್ನು ಪಾಲಿಸುತ್ತಾ ಬಂದಿದ್ದಾರೆ. ಹಸಿರು ಸಂಪನ್ಮೂಲವಾದ ಅರಣ್ಯಗಳು
ಉಸಿರಿಗೆ ಮೂಲ ಎಂದು ತಿಳಿದೇ ನಮ್ಮ ಪೂರ್ವಿಕರು ಅರಣ್ಯವನ್ನು ಪವಿತ್ರವೆಂದು ಭಾವಿಸಿದ್ದರು.
ಅರಣ್ಯದ ಸ್ವಲ್ಪ ಭಾಗವನ್ನು ಸ್ಥಳೀಯ ದೇವರಿಗೆ ಮುಡುಪಾಗಿಡುತ್ತಿದ್ದರು. ಆ ದೇವರು ಅರಣ್ಯಕ್ಕೆ
ಮತ್ತು ಅಲ್ಲಿರುವ ಎಲ್ಲ ಜೀವಿಗಳಿಗೆ ರಕ್ಷಣೆ ನೀಡುತ್ತಾನೆ ಎಂಬ ದೃಢನಂಬಿಕೆ ಮೊದಲಿನಿಂದಲೂ
ರೂಢಿಯಲ್ಲಿದೆ. ಅಲ್ಲಿರುವ ಸಸ್ಯ, ಪ್ರಾಣಿ, ಬೀಜ ಮುಂತಾದವು ಆ ದೇವರ ಸ್ವತ್ತು. ಅವನ್ನು ಬಳಸಿದರೆ
ದೇವರು ಮುನಿಸಿಕೊಳ್ಳುತ್ತದೆ, ಶಾಪ ನೀಡುತ್ತದೆ. ಆ ಅರಣ್ಯದ ಸಸ್ಯ, ಜೀವಿಗಳನ್ನು ಗೌರವಿಸಿದರೆ,
ರಕ್ಷಿಸಿದರೆ ದೇವರು ಒಳ್ಳೆಯದನ್ನು ಮಾಡುತ್ತದೆ, ವರವನ್ನು ನೀಡುತ್ತದೆ ಎಂದು ಅನೂಚಾನವಾಗಿ
ನಂಬುತ್ತಾರೆ. ಅಂತಹ ಅರಣ್ಯ ಪ್ರದೇಶವನ್ನು ಪವಿತ್ರವನ, ನಾಗವನ, ಸುಬ್ರಮಣ್ಯ ವನ ಎಂದು ಕರೆಯುವರು.
ಹಿಮಾಚಲ ಪ್ರದೇಶ, ಮಹಾರಾಷ್ಟ್ರ, ಮೇಘಾಲಯ ಮತ್ತು ಕರ್ನಾಟಕಗಳಲ್ಲಿ ಪವಿತ್ರವನಗಳನ್ನು
ಗುರುತಿಸಲಾಗಿದೆ.
ಬಿಷ್ಲೋಯಿಗಳು : ಇವರು ರಾಜಸ್ಥಾನಿಗಳು.
ಹಿಂದೂ ಧರ್ಮಕ್ಕೆ ಸೇರಿದವರು. ಪ್ರಕೃತಿಯನ್ನು ಪೂಜಿಸುವ ಮತ್ತು ಸಂರಕ್ಷಿಸುವ
ಸಂಪ್ರದಾಯವಿರುವವರು. ಬೇಜ್ರಿಮರ (Prosopis cinararia) ಮತ್ತು ಕೃಷ್ಣ ಮೃಗವನ್ನು (Black buck) ದೇವರೆಂದು ಭಾವಿಸುವವರು. ಅವರು ವಾಸಿಸುವ ಸ್ಥಳದ
ಆಸುಪಾಸಿನಲ್ಲಿರುವ ಎಲ್ಲ ಸಸ್ಯ ಮತ್ತು ಪ್ರಾಣಿಗಳನ್ನು ಪವಿತ್ರವೆಂದು ತಿಳಿಯುವವರು. ಅವರಿರುವ
ಹಳ್ಳಿಗಳಲ್ಲಿ ಪ್ರಾಣಿಗಳು ಯಾವ ಭಯ ಭೀತಿಯಿಲ್ಲದೆ ಜನರು ನೀಡುವ ಆಹಾರ ತಿನ್ನುತ್ತಾ
ಅಲೆದಾಡುತ್ತಿರುತ್ತವೆ. ಸಾಮಗ್ರಿಗಳನ್ನು ತಯಾರಿಸಲು ಇವರು ಮರಗಳನ್ನು ಕಡಿಯುವುದಿಲ್ಲ. ಮರಗಳು
ಸತ್ತ ಮೇಲೆಯೇ ಅವನ್ನು ಕತ್ತರಿಸಿ ಬಳಸುತ್ತಾರೆ. ಅವರು ಹೆಣವನ್ನು ಸುಡುವುದಿಲ್ಲ. ನೆಲದಲ್ಲಿ
ಹೂಳುತ್ತಾರೆ. ದೇಹದ ವಸ್ತುಗಳು ಪ್ರಕೃತಿಯಲ್ಲಿ ಲೀನವಾಗಿ ಸಸ್ಯಗಳ ಬೆಳವಣಿಗೆಗೆ ದೊರೆಯಲಿ ಎಂಬುದು
ಇವರ ಉದ್ದೇಶ. ಇವರು ಕೆರೆಕಟ್ಟೆಗಳನ್ನು ನಿರ್ಮಿಸಿ ನೀರು ಸಂಗ್ರಹಿಸುವರು. ತಮಗೂ, ಇತರೆ
ಪ್ರಾಣಿಗಳಿಗೂ ಜೀವಜಲ ದೊರಕುವಂತೆ ಮಾಡುವರು.
ವನಗುಜ್ಜಾರರು : ಇವರು ಅರಣ್ಯವಾಸಿಗಳು.
ಶತಮಾನಗಳಿಂದ ಹಿಮಾಲಯದ ತಪ್ಪಲು ಪ್ರದೇಶದಲ್ಲಿ ವಾಸಿಸುತ್ತಿದ್ದಾರೆ. ತಾವು ಸಾಕಿರುವ
ಎಮ್ಮೆಗಳನ್ನು ಕಾಡುಮೇಡುಗಳಲ್ಲಿ ಮೇಯಿಸುವರು. ಚಳಿಗಾಲದಲ್ಲಿ ಮೇವಿಗಾಗಿ ಮರದ ತುದಿಯಲ್ಲಿನ ಸಣ್ಣ
ರೆಂಬೆಗಳನ್ನು ಕತ್ತರಿಸುವರು. ಆದರೆ ದೊಡ್ಡ ಕೊಂಬೆಗಳು ಇರುವಂತೆ ಎಚ್ಚರಿಕೆ ವಹಿಸುವರು. ಮತ್ತೆ ಆ
ಮರಗಳು ಚಿಗಿರೊಡೆದು ಎಲೆಗಳು ತುಂಬಿ ಮರ ಮೊದಲಿನಂತೆ ಆಗುವ ಬಗ್ಗೆ ಅವರಿಗೆ ಪಾರಂಪರಿಕ
ಜ್ಞಾನವಿದೆ. ಕೆಲವು ಮರಗಳನ್ನು ಎಲೆಗಳು ಉದುರುವ ಮೊದಲು ಅದರ ರೆಂಬೆಗಳನ್ನು ಕತ್ತರಿಸಿ ಬಳಸುವರು.
ಹೊಸದಾಗಿ ಎಲೆಗಳು ಚಿಗುರಿದಾಗ ರೆಂಬೆಗಳನ್ನು ಕತ್ತರಿಸುವುದಿಲ್ಲ. ಹೀಗೆ ಹಸಿರು ಎಲೆಗಳ ಪ್ರಯೋಜನ
ಮರಗಳಿಗೆ ಪೂರ್ಣವಾಗಿ ಸಿಗುವಂತೆ ಎಚ್ಚರಿಕೆ ವಹಿಸುವರು. ಎಮ್ಮೆಗಳ ಸಗಣಿಯು ಅರಣ್ಯಕ್ಕೆ ತುಂಬ
ಒಳ್ಳೆಯ ಗೊಬ್ಬರ. ಇವರು ಅರಣ್ಯ ಮತ್ತು ವನ್ಯಜೀವಿಗಳೊಡನೆ ಸಮನ್ವಯ ಸಾಧಿಸಿದ್ದಾರೆ. ಇವರು
ಇರುವೆಡೆ ವನ್ಯಜೀವಿಗಳು ಸುಖವಾಗಿರುತ್ತವೆ. ಇವರು ಅರಣ್ಯ ಮತ್ತು ವನ್ಯಜೀವಿಗಳನ್ನು ಸಂರಕ್ಷಿಸುವರು.
ಇವರಿಗೆ ಅರಣ್ಯದ ಪ್ರತಿ ಪ್ರಭೇದ, ಕೀಟ, ಪಕ್ಷಿ, ಪ್ರಾಣಿಯ ಪರಿಚಯವಿರುತ್ತದೆ. ಅವುಗಳ ಜೀವನ
ಶೈಲಿ, ಸ್ವಭಾವದ ಅರಿವಿದೆ. ಅವುಗಳ ಕೂಗಿನಿಂದಲೇ ಗುರುತಿಸುವ ಸಾಮರ್ಥ್ಯವಿದೆ.
ಚಿಪ್ಕೊ ಚಳುವಳಿ;- ಹಿಂದಿ ಭಾಷೆಯಲ್ಲಿ ‘ಚಿಪ್ಕೊ’ ಎಂದರೆ ಅಪ್ಪಿಕೊ ಎಂಬರ್ಥ. ೧೯೭೩ರ ಏಪ್ರಿಲ್ ತಿಂಗಳಲ್ಲಿ
ಉತ್ತರ ಪ್ರದೇಶ ಅಲಕಾನಂದ ಕಣಿವೆ ಪ್ರದೇಶದಲ್ಲಿರುವ ಮಂಡಲ್ ಗ್ರಾಮದ ಮಹಿಳೆಯರು ಮರ ಅಪ್ಪಿಕೊಳ್ಳುವ
ಕ್ರಮವನ್ನು ಕೈಗೊಂಡರು. ಮರಗಳ ರಕ್ಷಣೆ ಮಾಡುವುದಕ್ಕೆ ಮಹಿಳೆಯರು ಮರಗಳನ್ನು ತಬ್ಬಿಕೊಂಡರು. ಮರ
ಕಡಿಯುವವರಿಂದ ರಕ್ಷಿಸಿದರು. ದಸೋಲಿ ಗ್ರಾಮ ಸ್ವರಾಜ್ ಸಂಘ ಎಂಬ ಸೇವಾ ಸಂಘದ ಪ್ರೋತ್ಸಾಹದಿಂದಾಗಿ
ಸ್ಥಳೀಯ ಮಹಿಳೆಯರು ಅರಣ್ಯದೊಳಗೆ ಪ್ರವೇಶಿಸಿದರು. ಮರಗಳ ಸುತ್ತ ಮಾನವ ಸರಪಳಿಯನ್ನು
ನಿರ್ಮಿಸಿದರು. ಮರ ಕಡಿಯಲು ಬಂದವರಿಗೆ ವಿನೂತನ ರೀತಿಯ ಪ್ರತಿಭಟನೆ ಮಾಡಿದರು. ಮರ ಕಡಿಯಲು
ಬಿಡಲಿಲ್ಲ. ಈ ಚಳವಳಿಯ ಯಶಸ್ಸು ಎಲ್ಲ ಕಡೆ ಹರಡಿತು. ಅದೇ ರೀತಿಯ ಪ್ರತಿಭಟನೆಗಳು ಮತ್ತು ಮರಗಳ
ಸಂರಕ್ಷಣಾ ಚಳವಳಿ ದೇಶದೆಲ್ಲೆಡೆ ಪಸರಿಸಿತು. ಈ ಚಳವಳಿಯ ಬೆಂಬಲಿಗರು ಪ್ರಮುಖವಾಗಿ ಮಹಿಳೆಯರು. ಹಲವಾರು
ಪ್ರದೇಶಗಳಲ್ಲಿ ಮರ ಉರುಳಿಸುವುದನ್ನು ತಡೆದರು. ಉತ್ತರ ಪ್ರದೇಶದಲ್ಲಿ ವಿಸ್ತೃತವಾಗಿ ಹರಡಿದ
ಚಿಪ್ಕೊ ಚಳವಳಿಯು ರಾಜಕೀಯ ಪ್ರತಿನಿಧಿಗಳ ಹಾಗೂ ಸರ್ಕಾರದ ಗಮನವನ್ನು ಸೆಳೆಯಿತು. ೧೯೮೦ರಲ್ಲಿ
ಅಂದಿನ ಪ್ರಧಾನಮಂತ್ರಿಯಾಗಿದ್ದ ಶ್ರೀಮತಿ ಇಂದಿರಾಗಾಂಧಿಯವರು ಹಿಮಾಲಯ ತಪ್ಪಲಿನಲ್ಲಿರುವ ಅರಣ್ಯದ
ಮರಗಳನ್ನು ಕತ್ತರಿಸುವುದಕ್ಕೆ ೧೫ ವರ್ಷಗಳ ನಿರ್ಬಂಧವನ್ನು ಕಾನೂನಿನ ಮೂಲಕ ಜಾರಿಗೆ ತಂದರು. ಈ
ಚಳವಳಿಯಿಂದ ಪ್ರೇರಣೆ ಪಡೆದು ಪಶ್ಚಿಮ ಘಟ್ಟಗಳಲ್ಲಿ ‘ಅಪ್ಪಿಕೊ’ ಚಳವಳಿ ಆರಂಭವಾಯಿತು. ವಿಂಧ್ಯಾ
ಪರ್ವತ ಪ್ರದೇಶದಲ್ಲಿಯೂ ಚಿಪ್ಕೊ ರೀತಿಯ ಚಳವಳಿ ಆರಂಭವಾಯಿತು. ನೈಸರ್ಗಿಕ ಸಂಪನ್ಮೂಲಗಳ ರಕ್ಷಣೆಯ
ಬಗ್ಗೆ ನೀತಿ-ನಿಯಮಗಳನ್ನು ರೂಪಿಸಲು ಒತ್ತಡ ನಿರ್ಮಾಣವಾಯಿತು. ಜನರ ಅಗತ್ಯಗಳನ್ನು ಮತ್ತು
ಪಾರಿಸಾರಿಕ ಅಗತ್ಯಗಳನ್ನು ದೃಷ್ಠಿಯಲ್ಲಿರಿಸಿಕೊಂಡು ಪರಿಸರ ನೀತಿ ರಚನೆಯಾಗಬೇಕೆಂಬ ಅಭಿಪ್ರಾಯ ಮೂಡಿತು. ಹವಾಗುಣ ಬದಲಾವಣೆಯ ಸಮಸ್ಯೆಗಳ ಬಗ್ಗೆ ಅರಿವು
ಮೂಡಿಸಲು ಹಾಗೂ ದುಷ್ಪರಿಣಾಮಗಳಿಗೆ ಪರಿಹಾರಗಳನ್ನು ಸೂಚಿಸುವಲ್ಲಿ ಪಾತ್ರ ವಹಿಸುವ ಅನೇಕರಲ್ಲಿ
ಕೆಲವು ಪ್ರಮುಖರ ಪರಿಚಯ ಮತ್ತು ಅವರ ಕೊಡುಗೆಯನ್ನು ಕೆಳಗೆ ನೀಡಲಾಗಿದೆ.
ಅಣ್ಣ ಹಜಾರೆ ಅಥವಾ
ಕಿಶನ್ ಬಾಬುರಾವ್ ಹಜಾರೆ : ಪ್ರಖ್ಯಾತ ಸಮಾಜ ಸೇವಕ.
ಮಹಾರಾಷ್ಟ್ರದ ಅಹಮದಾಬಾದ್ ಜಿಲ್ಲೆಯ ರಿಲೆಗಾನ್ ಸಿದ್ದಿಹಳ್ಳಿಯನ್ನು ಬರಗಾಲ ಮತ್ತು ಬಡತನದ ಕ್ರೂರ
ಕಪಿಮುಷ್ಟಿಯಿಂದ ಬಿಡುಗಡೆಗೊಳಿಸಿ ಸಮೃದ್ಧ ಸ್ವಾವಲಂಬಿ ಮಾದರಿ ಹಳ್ಳಿಯನ್ನಾಗಿ ಪರಿವರ್ತಿಸಿದ
ಹರಿಕಾರ. ಸುಸ್ಥಿರ ವಿಧಾನಗಳ ಮೂಲಕ ಸಮಸ್ಯೆಗಳನ್ನು ಪರಿಹರಿಸಲು ಸೂಚಿಸಿದ ನೇತಾರ. ಅವರ
ನೇತೃತ್ವದಲ್ಲಿ ಮಳೆ ನೀರಿನ ಹರಿವನ್ನು ತಡೆಯಲು, ಮಣ್ಣಿನಲ್ಲಿ ಹಿಂಗುವಂತೆ ಮಾಡಲು ಹಲವಾರು
ಕಾಲುವೆ, ಕಟ್ಟೆ, ಬದುಗಳನ್ನು ನಿರ್ಮಿಸಲಾಯಿತು. ಮಳೆ ನೀರು ಸಂಗ್ರಹಣೆ ಯಶಸ್ವಿಯಾಗಿ ಭೂಮಿಯಲ್ಲಿ
ಅಂತರ್ಜಲದ ಮಟ್ಟ ಮೇಲಕ್ಕೇರಿತು. ನೀರಾವರಿ ಅನುಕೂಲ ಅಧಿಕವಾಯಿತು. ಈಗ ಕೃಷಿಯಲ್ಲಿ ಬೆಳೆಗಳ
ಇಳುವರಿ ಹೆಚ್ಚಿದೆ. ಮರಾವಳಿ ಮಾಡುವುದನ್ನು ಮತ್ತು ಇಳಿಜಾರು ಪ್ರದೇಶಗಳಲ್ಲಿ ಸಮತಟ್ಟು
ಕೃಷಿಯನ್ನು ಅಣ್ಣ ಹಜಾರೆ ಪ್ರೋತ್ಸಾಹಿಸಿದರು. ಮಳೆ ನೀರು ಚೆನ್ನಾಗಿ ಮಣ್ಣಿನಲ್ಲಿ ಹಿಂಗಲು
ಸಾಧ್ಯವಾಯಿತು. ಹಳ್ಳಿಯ ಎಲ್ಲಕಡೆ ಸೌರಫಲಕಗಳನ್ನು ಹಾಕಿ ವಿದ್ಯುತ್ ಪಡೆಯಲಾಗಿದೆ. ಜೈವಿಕ ಅನಿಲ ಸ್ಥಾವರಗಳ
ಮೂಲಕ ಅಡಿಗೆಗೆ ಅನಿಲ ಪಡೆಯಲಾಗಿದೆ. ಇಲ್ಲಿ ಗಾಳಿ ಗಿರಣಿಯನ್ನು ಸ್ಥಾಪಿಸಿದರು. ೧೯೯೦ರಲ್ಲಿ ಅಣ್ಣ
ಹಜಾರೆಗೆ ರಾಷ್ಟ್ರದ ಉನ್ನತ ನಾಗರಿಕ ಗೌರವವಾದ ಪದ್ಮಶ್ರೀ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ.
ಶ್ರೀ ಚಂಡಿ ಪ್ರಸಾದ್
ಭಟ್ : ಚಿಪ್ಕೊ ಚಳವಳಿಯ ಪ್ರಮುಖ
ನಾಯಕರಲ್ಲಿ ಒಬ್ಬರು. ಇವರು ಮಹಿಳೆಯರಲ್ಲಿ ಪರಿಸರ ಪ್ರಜ್ಞೆ ಬೆಳೆಸಲು ಅಹರ್ನಿಶಿ ದುಡಿದರು.
ಮಹಿಳೆಯರು ತಮ್ಮ ಪರಿಸರ ಹಕ್ಕುಗಳನ್ನು ಪಡೆಯಲು ಪ್ರೋತ್ಸಾಹಿಸಿದರು. ಮಾನವನ ಚಟುವಟಿಕೆಗಳಿಂದ
ಪರಿಸರದ ಮೇಲಾಗುವ ಆಘಾತಗಳು ಮಹಿಳೆಯರಿಗೆ ಮನಮುಟ್ಟುವಂತೆ ವಿವರಿಸಿದರು. ಆಘಾತದ ಪ್ರಮಾಣವನ್ನು
ಲೆಕ್ಕ ಹಾಕುವುದನ್ನು ಮಹಿಳೆಯರಿಗೆ ತಿಳಿಸಿಕೊಟ್ಟರು. ಅಲಕಾನಂದ ಕಣಿವೆ ಪ್ರದೇಶದಲ್ಲಿ ಮತ್ತೆ
ಮರಗಳನ್ನು ಬೆಳೆಸಲು ಕಾರ್ಯಕ್ರಮಗಳನ್ನು ಸಂಘಟಿಸಿದರು. ಪರಿಸರ ಅಭಿವೃದ್ಧಿ ಶಿಬಿರಗಳನ್ನು
ಏರ್ಪಡಿಸಿದರು. ಸಸಿ ನೆಡುವುದರಲ್ಲಿ ಮಹಿಳೆಯರು ಸ್ಥಳೀಯ ಜನರು ಪಾಲ್ಗೊಳ್ಳುವಂತೆ
ಪ್ರೋತ್ಸಾಹಿಸಿದರು. ಚಂಡಿ ಪ್ರಸಾದ್ ಭಟ್ಟರು ದಸೋಲಿ ಗ್ರಾಮ ಸ್ವರಾಜ್ ಮಂಡಲಿಯನ್ನು
ಸಂಸ್ಥಾಪಿಸಿದರು. ಅಲಕಾನಂದ ನದಿ ಪ್ರದೇಶದಲ್ಲಿ ಪೂರ್ಣವಾಗಿ ಹಾಳಾಗಿದ್ದ ಪ್ರದೇಶದಲ್ಲಿ
ಸಮುದಾಯದಿಂದ ಅರಣ್ಯೀಕರಣ ಯೋಜನೆಯನ್ನು ಈ ಮಂಡಲಿ ಯಶಸ್ವಿಯಾಗಿ ಪೂರೈಯಿಸಿತು. ಪರ್ವತಗಳ
ಪ್ರದೇಶದಲ್ಲಿ ಪರಿಸರ ರಕ್ಷಣೆಗಾಗಿ ದುಡಿದ ಶ್ರೀ ಭಟ್ಟರ ಪಾತ್ರವನ್ನು ಗುರುತಿಸಿ ೧೯೮೨ರಲ್ಲಿ
ಶ್ರೀಯುತರಿಗೆ ರಾಮನ್ ಮ್ಯಾಗೆಸ್ಸೆ ಪ್ರಶಸ್ತಿಯನ್ನು ಸಮುದಾಯ ನಾಯಕತ್ವಕ್ಕಾಗಿ ನೀಡಲಾಯಿತು.
ಡಾ|| ಎಂ.ಎಸ್.
ಸ್ವಾಮಿನಾಥನ್ : ಭಾರತದ ಪ್ರಖ್ಯಾತ ಕೃಷಿ ವಿಜ್ಞಾನಿ. ಭಾರತ ಹಸಿರು
ಕ್ರಾಂತಿಯ ಪ್ರವರ್ತಕ. ಇವರು ಅಧಿಕ ಇಳುವರಿಯ ಗೋಧಿ ಮತ್ತು ಭತ್ತದ ತಳಿಗಳನ್ನು
ಅಭಿವೃದ್ಧಿಪಡಿಸಿದರು. ಉತ್ತಮವಾದ ಆಲೂಗೆಡ್ಡೆ ಹಾಗೂ ಸೆಣಬಿನ ಹೈಬ್ರಿಡ್ ತಳಿಗಳನ್ನು ಸೃಜಿಸಿದರು.
ಸಂಶೋಧನೆಯ ಲಾಭ ಕೃಷಿಕರಿಗೆ ಸಿಗುವಂತೆ ಮಾಡಲು ವಿವಿಧ ಯೋಜನೆ ಹಾಗೂ ಕಾರ್ಯಕ್ರಮಗಳನ್ನು
ರೂಪಿಸಿದರು. ಅವರು ಕೃಷಿ ಉತ್ಪಾದನೆಯನ್ನು ಹೆಚ್ಚಿಸಲು ಆಧುನಿಕ ವಿಧಾನ ಮತ್ತು
ತಂತ್ರವಿಧಾನಗಳನ್ನು ಪರಿಚಯಿಸಿದರು. ಇವರು ಕೃಷಿಕ್ಷೇತ್ರಕ್ಕೆ ಕೊಡುಗೆ ನೀಡಿರುವಂತೆ, ಪರಿಸರ
ರಕ್ಷಣೆ, ಜೀವಿ ವೈವಿಧ್ಯ ಸಂರಕ್ಷಣೆ ಮತ್ತು ಬಡತನ ನಿರ್ಮೂಲನೆಗೂ ಅಪಾರ ಕೊಡುಗೆ ನೀಡಿದ್ದಾರೆ.
ಇವರ ಕೊಡುಗೆಯನ್ನು ಪರಿಗಣಿಸಿ ೧೯೯೯ರಲ್ಲಿ UNESCO ಗಾಂಧಿ, ಬಂಗಾರದ ಪದಕ, ೧೯೭೧ರಲ್ಲಿ
ರಾಮನ್ ಮ್ಯಾಗೆಸ್ಸೆ ಪ್ರಶಸ್ತಿ ಮತ್ತು ೧೯೮೭ರಲ್ಲಿ ವಿಶ್ವ ಆಹಾರ ಪ್ರಶಸ್ತಿ ನೀಡಿ
ಗೌರವಿಸಲಾಗಿದೆ.
ಶ್ರೀ ಮಹೇಶ್ಚಂದ್ರ
ಮೆಹ್ತ : ವೃತ್ತಿಯಲ್ಲಿ ನ್ಯಾಯವಾದಿ, ಪ್ರವೃತ್ತಿಯಲ್ಲಿ
ಪರಿಸರವಾದಿ, ದೇಶದ ಪರಿಸರ ರಕ್ಷಣೆಗೆ ಮತ್ತು ಶ್ರೀಸಾಮಾನ್ಯರಲ್ಲಿ ಶುದ್ಧಗಾಳಿ, ನೀರು ಪಡೆಯುವ
ಹಕ್ಕಿನ ಜಾಗೃತಿಯ ಬಗ್ಗೆ ವಿವಿಧ ಪ್ರಯತ್ನಗಳನ್ನು ಕೈಗೊಂಡ ವ್ಯಕ್ತಿ. ವಿಶ್ವದ ಅದ್ಭುತಗಳಲ್ಲಿ
ಒಂದಾದ ಹಾಗೂ ಪ್ರೀತಿಯ ಸಂಕೇತವಾದ ತಾಜ್ಮಹಲ್ ರಕ್ಷಣೆಗೆ ೧೯೮೪ರಲ್ಲಿ ಒಂದು ಹೋರಾಟವನ್ನೇ
ಆರಂಭಿಸಿದವರು ಶ್ರೀ ಮೆಹ್ತ. ಅವರ ಪ್ರಯತ್ನ ಯಶಸ್ಸು ಪಡೆದು, ಇಂದು ತಾಜ್ಮಹಲ್ ತನ್ನ
ಸೌಂದರ್ಯವನ್ನು ಕಾಪಾಡಿಕೊಳ್ಳಲು ಸಾಧ್ಯವಾಗಿದೆ. ೧೯೮೫ರಲ್ಲಿ ಶ್ರೀ ಮೆಹ್ತರವರು ಸರ್ವೋಚ್ಛ
ನ್ಯಾಯಾಲಯದಲ್ಲಿ ಸಾರ್ವಜನಿಕ ಆಸಕ್ತಿ ದಾವೆಯಲಿ ದೆಹಲಿಯ ಮಾಲಿನ್ಯ ಉಂಟು ಮಾಡುತ್ತಿದ್ದ ೧೨೦೦
ಕೈಗಾರಿಕೆಗಳ ವಿರುದ್ಧ ವಾದ ಮಂಡಿಸಿದರು. ೧೯೯೬ರಲ್ಲಿ ಸರ್ವೋಚ್ಛ ನ್ಯಾಯಾಲಯ ತೀರ್ಪು ನೀಡಿ ಕೆಲವು
ಕೈಗಾರಿಕೆಗಳು ಬೇರೆಡೆಗೆ ಹೋಗುವಂತೆ ಅಥವಾ ಅನೇಕ ಕಾರ್ಖಾನೆಗಳು ಮುಚ್ಚುವಂತೆ ಆದೇಶ ನೀಡಿತು.
ಶ್ರೀಯುತರ ಸಾರ್ವಜನಿಕ ಸೇವೆಯನ್ನು ಪರಿಗಣಿಸಿ ೧೯೯೭ರಲ್ಲಿ ರಾಮೊನ್ ಮ್ಯಾಗೆಸ್ಸೆ ಪ್ರಶಸ್ತಿ
ನೀಡಲಾಯಿತು.
ಶ್ರೀಮತಿ ಮೇಧಾ
ಪಾಟ್ಕರ್ : ನರ್ಮದಾ ಬಚಾವತ್ ಆಂದೋಲನದ ಪ್ರಮುಖ ನಾಯಕಿ, ಸಂಘಟನಾ ಚತುರೆ ಮತ್ತು ನಿರ್ಧಿಷ್ಟ ನಿಲುವ
ತಾಳಿರುವ ವ್ಯಕ್ತಿ. ಭಾರತದಲ್ಲಿ ಪಶ್ಚಿಮ ಮುಖವಾಗಿ ಹರಿಯುವ ನದಿಗಳಲ್ಲಿ ನರ್ಮದಾ ಅತಿ ದೊಡ್ಡ
ನದಿ. ಈ ನದಿಗೆ ಹಲವು ಅಣೆಕಟ್ಟುಗಳನ್ನು ನಿರ್ಮಿಸುತ್ತಿರುವ ಯೋಜನೆಯನ್ನು ಕೈಬಿಡಲು
ಆಗ್ರಹಿಸುತ್ತಿರುವ ಸಂಘಟನೆಯೇ ನರ್ಮದಾ ಬಚಾವತ್ ಆಂದೋಲನ. ಪ್ರಮುಖ ಅಣೆಕಟ್ಟಾದ ಸರ್ದಾರ್ ಸರೋವರ
ಅಣೆಕಟ್ಟು ನಿರ್ಮಾಣದಿಂದ ೩೭೦೦೦ ಹೆಕ್ಟೇರಿಗೂ ಅಧಿಕ ಪ್ರಮಾಣದ ಅರಣ್ಯ ಹಾಗೂ ಕೃಷಿ ಭೂಮಿ
ಮುಳುಗಡೆಯಾಗುವುದು ಮತ್ತು ೩೨೦೦೦೦ ಜನ ನಿರಾಶ್ರಿತರಾಗುವರು. ಅವರ ಜೀವನ ಅಸ್ತವ್ಯಸ್ತವಾಗುವುದು.
ಈ ಆಂದೋಲನದ ನಾಯಕತ್ವವನ್ನು ಬದ್ಧತೆಯಿಂದ ನಿರ್ವಹಿಸುತ್ತಿರುವುದರಿಂದ ೧೯೯೨ರಲ್ಲಿ ಇವರಿಗೆ
ಗೋಲ್ಡಮನ್ ಪರಿಸರ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.
ಡಾ. ರಾಜೇಂದ್ರ ಕುಮಾರ್
ಪಚೋರಿ : ಇವರು IPCC ಯ ಅಧ್ಯಕ್ಷರು.ಹವಾಗುಣ ಬದಲಾವಣೆಯ ಬಗ್ಗೆ
ವಿವಿಧ ರಾಷ್ಟ್ರನಾಯಕರಿಗೆ ಮನದಟ್ಟಾಗುವಂತೆ ವಿವರಿಸುವಲ್ಲಿ ಸಿದ್ಧಹಸ್ತರು. ಪರಿಸರಕ್ಕೆ
ಸಂಬಂಧಿಸಿದ ೨೩ ಪುಸ್ತಕಗಳನ್ನು ಬರೆದಿದ್ದಾರೆ. ೨೦೦೧ರಲ್ಲಿ ಭಾರತ ಸರ್ಕಾರ ಪದ್ಮಭೂಷಣ ಪ್ರಶಸ್ತಿ
ನೀಡಿ ಗೌರವಿಸಿದೆ. ೨೦೦೭ರಲ್ಲಿ ಇವರಿಗೆ ಆಲ್ಗೋರ್ ಜೊತೆಗೆ ನೊಬೆಲ್ ಶಾಂತಿ ಪುರಸ್ಕಾರ ದೊರಕಿದೆ.
ಭಾರತ ಅರಣ್ಯ ಜೀವಿ ಧಾಮಗಳು, ಮೀಸಲು ಪ್ರದೇಶಗಳು ಹಾಗು ಉದ್ಯಾನವನಗಳು ಮತ್ತು ಅವು ಇರುವ ಸ್ಥಳ
1.
ನಾಗರಹೊಳೆ ರಾಷ್ಟ್ರೀಯ ಉದ್ಯಾನವನ - ಕೊಡಗು, ಕರ್ನಾಟಕ
ರಾಜ್ಯ.
2.
ಬಂಡೀಪುರ ಉದ್ಯಾನವನ- ಕರ್ನಾಟಕ ಮತ್ತು ತಮಿಳು ನಾಡಿನ
ಗಡಿ ಪ್ರದೇಶ.
3.
ಭನ್ನೇರುಘಟ್ಟ ರಾಷ್ಟೀಯ ಉದ್ಯಾನವನ - ಬೆಂಗಳೂರು,
ಕರ್ನಾಟಕ.
4.
ಭದ್ರ ವನ್ಯ ಜೀವಿ ತಾಣ - ಚಿಕ್ಕಮಗಳೂರು, ತುಂಗಭದ್ರ
ವನ್ಯಧಾಮ - ಬಳ್ಳಾರಿ, ಕರ್ನಾಟಕ.
5.
ದಾಂಡೇಲಿ ಅರಣ್ಯ ಧಾಮ - ದಾಂಡೇಲಿ, ಕರ್ನಾಟಕ.
6.
ರಂಗನತಿಟ್ಟು ಪಕ್ಷಿಧಾಮ - ಶ್ರೀರಂಗಪಟ್ಟಣ , ಸೋಮೇಶ್ವರ
ವನ್ಯಧಾಮ - ಉತ್ತರಕನ್ನಡ, ಕರ್ನಾಟಕ.
7.
ಸರಸ್ವತಿ ಕಣಿವೆ ಅರಣ್ಯ ಧಾಮ - ಶಿವಮೊಗ್ಗ , ಕರ್ನಾಟಕ.
8.
ಗಿರ ಅರಣ್ಯ ಧಾಮ - ಜುನಾಘಡ್ , ಗುಜರಾತ್.
9.
ಅಚಾನ್ಕ್ಮಾರ್ ವನ್ಯ ತಾಣ - ಬಿಲಾಸ್ ಪುರ, ಛತ್ತೀಸ್ ಗಡ
.
10.
ಬಂದಾವ್ ಘರ್ ರಾಷ್ಟ್ರೀಯ್ ಉದ್ಯಾನ - ಶಾಹ್ ದಾಲ್ ,
ಮಧ್ಯಪ್ರದೇಶ್
11.
ಭೋರಿವಿಲಿ ರಾಷ್ಟ್ರೀಯ ಉದ್ಯಾನವನ - ಮುಂಬೈ ,
ಮಹಾರಾಷ್ಟ್ರ
12.
ಕಾರ್ಬೆಟ್ ರಾಷ್ಟ್ರೀಯ ಉದ್ಯಾನವನ - ನೈನಿತಾಲ್ ,
ಉತ್ತರಾಂಚಲ
13.
ವೈಲ್ಡ್ ಯಾಸ್ ವನ್ಯಧಾಮ - ಕಛ, ಗುಜರಾತ್. @ ದಾಲ್ಮ ವನ್ಯಧಾಮ - ಸಿಂಗಭೂಂ,
ಜಾರ್ಖಂಡ್.
14.
ಗಾಂಧೀ ಸಾಗರ ಅರಣ್ಯಧಾಮ - ಮಾನ್ಡಸೂರು,ಮಧ್ಯಪ್ರದೇಶ್
15.
ಗೌತಮ್ ಬುದ್ದ ವನ್ಯಧಾಮ - ಗಯಾ, ಬಿಹಾರ.
16.
ಹಜಾರಿಬಾಗ್ ಅರಣ್ಯ ಧಾಮ - ಹಜಾರಿ ಬಾಗ್ , ಜಾರ್ಖಂಡ್.
17.
ಕಾಜೀರಂಗ ರಾಷ್ಟೀಯ ಉದ್ಯಾನವನ - ಜೋರಾಹ್ಟ್,ಅಸ್ಸಾಂ
18.
ನಾವೆಗೋನ್ ರಾಷ್ಟೀಯ ಉದ್ಯಾನವನ - ಭಂಡಾರ, ಮಹಾರಾಷ್ಟ್ರ
19.
ಪಚಮಾರಿ ವನ್ಯಧಾಮ - ಹೊಶಾನ್ಗಬಾದ್, ಮಧ್ಯಪ್ರದೇಶ್.
20.
ಶಿಕಾರಿ ದೇವಿ ವನ್ಯಧಾಮ - ಮಂಡಿ, ಹಿಮಾಚಲ ಪ್ರದೇಶ.
21.
ಶಿವಪುರಿ ರಾಷ್ಟೀಯ ಉದ್ಯಾನವನ - ಶಿವಪುರಿ , ಮಧ್ಯ
ಪ್ರದೇಶ.
22.
ಸುಂದರ್ ಬನ್ಸ್ ಹುಲಿ ಸಂರಕ್ಷಣಾಧಾಮ - 24 ಪರಗಣಗಳು ,
ಪಶ್ಚಿಮ ಬಂಗಾಳ.
23.
ತಾದ್ವಾಯಿ ವನ್ಯಧಾಮ - ವಾರಂಗಲ್,ಆಂದ್ರಪ್ರದೇಶ.
24.
ಘಾನ ಪಕ್ಷಿಧಾಮ - ಭರತ್ ಪುರ ,ರಾಜಸ್ಥಾನ.
25.
ದುದ್ವಾ ರಾಷ್ಟ್ರೀಯ ಉದ್ಯಾನವನ - ತೆರಾಯಿ, ಉತ್ತರ
ಪ್ರದೇಶ.
26.
ಇಂತಗ್ಕಿ ವನ್ಯಧಾಮ - ಕೊಹಿಮಾ ,ನಾಗಾಲ್ಯಾಂಡ್.
27.
ತಾನ್ಸ್ ಅರಣ್ಯಧಾಮ - ಧಾನೆ, ಮಹಾರಾಷ್ಟ್ರ
ಬ್ರಿಟಿಷ್ ಕೋಲಂಬಿಯಾವು
ಕೆನಡಾದ ರಾಷ್ಟ್ರೀಯ ಉದ್ಯಾನವನಗಳಲ್ಲಿ ಏಳು ಉದ್ಯಾನವನಗಳನ್ನು ಒಳಗೊಳ್ಳುತ್ತದೆ:
ಗ್ಲೇಸಿಯರ್ ರಾಷ್ಟ್ರೀಯ ಉದ್ಯಾನವನ * ಗಲ್ಫ್ ದ್ವೀಪಗಳ ರಾಷ್ಟ್ರೀಯ ಉದ್ಯಾನವನ
ಮೀಸಲು ಸ್ಥಳಗಳು
ಗ್ವಾಯಿ ಹಾನಾಸ್ ರಾಷ್ಟ್ರೀಯ ಉದ್ಯಾನವನ
ಮೀಸಲು ಸ್ಥಳ ಮತ್ತು ಹೈಡಾ ಹೆರಿಟೇಜ್ ನಿವೇಶನ
ಕೂಟನೇಯ್ ರಾಷ್ಟ್ರೀಯ ಉದ್ಯಾನವನ * ಮೌಂಟ್ ರೆವೆಲ್ಸ್ಟೋಕ್ ರಾಷ್ಟ್ರೀಯ
ಉದ್ಯಾನವನ
ಪೆಸಿಫಿಕ್ ರಿಮ್ ರಾಷ್ಟ್ರೀಯ ಉದ್ಯಾನವನ
ಮೀಸಲು ಸ್ಥಳ * ಯೊಹೋ ರಾಷ್ಟ್ರೀಯ
ಉದ್ಯಾನವನ
· Estimated Weight
(mass)
5,940,000,000,000,000,000,000 metric tons
· Estimated Age 4.6 billion years Current
Population 7,000,000,001
· Surface Area 510,066,000 sq km Land Area 148,647,000
sq km 29.1%
· Ocean Area 335,258,000 sq km Total Water Area 361,419,000 sq
km 70.9%
· Type of Water 97% salt, 3% fresh Circumference at the equator 40,066 km
· Circumference at the
poles 39, 992 km Diameterat the equator 12,753 km
· Diameter at the
poles 12,710 km Radius at the equator 6,376 km
· Orbit Speeds The earth orbits the Sun at 66,700 mph
(107,320 km per hour)
· Sun Orbit The earth orbits the Sun every 365 days,
5 hours, 48 minutes and 46 seconds